ಸಣ್ಣ ಕಥೆ
*ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ (ರಿ) ಮೈಸೂರು* ~~~~~~~~~~~~~~~~~~ *ಮಕ್ಕಳ ಸಮಗ್ರ ವಿಕಾಸ ಶಿಕ್ಷಕರ ಸಮಿತಿ ವತಿಯಿಂದ* *ಹಮ್ಮಿಕೊಂಡಿರುವ* 🤝🤝🤝🤝🤝🤝🤝🤝🤝 *ಚಿತ್ರ ನೋಡಿ ಕಥೆ ಕಟ್ಟೋಣ ಬಾರಾ* (ಮಕ್ಕಳ ನೀತಿ ಕಥೆಗಳು) 🙏🙏🙏🙏🙏🙏🙏🙏🙏🙏🙏 ಶೀರ್ಷಿಕೆ: ಪ್ರಾಣಿ ಪ್ರಿಯ ಮೋಹನ ಒಂದೂರಿನಲ್ಲಿ ರಾಮಪ್ಪ ಮತ್ತು ನಿಂಗಮ್ಮ ದಂಪತಿಗಳು ವಾಸವಾಗಿದ್ದರು. ಅವರು ಬಡತನದಲ್ಲಿ ತಮ್ಮ ಜೀವನ ನಡೆಸುತ್ತಿದ್ದರು. ಅವರಿಗೆ ಮೋಹನನೆಂಬ ಮಗ ಇದ್ದ. ರಾಮಪ್ಪನು ತನ್ನ ಜೀವನ ನಿರ್ವಹಣೆಗಾಗಿ ಕತ್ತೆಗಳನ್ನು ಸಾಕಿದ್ದನು ಜೊತೆಗೆ ಮನೆ ಕಾಯಲು ಒಂದು ನಾಯಿ ಕೂಡ ಇತ್ತು. ಮೋಹನ ಒಬ್ಬನೇ ಇದ್ದುದರಿಂದ ಕತ್ತೆಗಳು ಹಾಗೂ ನಾಯಿಯ ಜೊತೆ ಆಟವಾಡುತ್ತ ಬೆಳೆದ. ಅವುಗಳಿಗೆ ಮೇವು,ತಿಂಡಿ ಕೊಡುತ್ತಿದ್ದನು. ಶಾಲೆ ರಜೆ ಇರುವ ಸಮಯದಲ್ಲಿ ಮೇಯಿಸಲು ಗದ್ದೆಗೆ ಹೋಗುತ್ತಿದ್ದನು. ಒಟ್ಟಾರೆ ಪ್ರಾಣಿಗಳು ಎಲ್ಲ ಸೇರಿ ಒಂದೇ ಕುಟುಂಬದ ತರಹ ಅನ್ಯೋನವಾಗಿದ್ದವು. ಹೀಗೆ ಒಮ್ಮೆ ಹರಿಲಾಲ್ ಎಂಬ ವ್ಯಾಪಾರಿಯು ಮಾರ್ಗ ಮಧ್ಯೆ ಬರುತ್ತಿರುವಾಗ ಗದ್ದೆಯಲ್ಲಿ ಮೇಯುತಿದ್ದ ಕತ್ತೆಗಳನ್ನು ಕಂಡನು.ಅವುಗಳಲ್ಲಿ ದಷ್ಟಪುಷ್ಟವಾಗಿದ್ದ ಒಂದು ಕತ್ತೆ ಅವನಿಗೆ ಹಿಡಿಸಿತು. ಹರಿ ಲಾಲನು ಕತ್ತೆಯನ್ನು ಕೊಳ್ಳಲು ನಿರ್ಧರಿಸಿದನು. ಹಣದ ಅವಶ್ಯಕತೆ ಇದುದ್ದರಿಂದ ರಾಮಪ್ಪ ಮಾರಾಟ ಮಾಡಲು ಒಪ್ಪಿದನು. ಪ್ರೀತಿಯ ಕತ್ತೆಯನ್ನು ಮಾರಾಟ ಮಾಡಿದ ವಿಷಯವು ಮೋಹನನ ಕಿವಿಗೆ ಬಿದ್ದಿತ...